ಬಂಟ್ವಾಳ: ಶ್ರೀರಾಮ ಪ್ರಥಮ ದರ್ಜೆ ಕಾಲೇಜು ಇಲ್ಲಿನ ಪ್ರಣತಿ ಇಂಗ್ಲೀಷ್ ಸಂಘದ ವತಿಯಿಂದ ಅಂತರ್ರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿ ಪ್ರಾಚಾರ್ಯ ಕೃಷ್ಣಪ್ರಸಾದ್ ಕಾಯರ್ಕಟ್ಟೆ ವಹಿಸಿ, ಎಲ್ಲಾ ದೇಶಗಳಲ್ಲಿರುವ ಅಭಿಪ್ರಾಯವೆಂದರೆ ಪುರುಷರು ಮತ್ತು ಮಹಿಳೆಯರು ಸಮಾನರು. ಆದರೆ ಭಾರತ ದೇಶದಲ್ಲಿ ಹೆಣ್ಣಿನ ಬಗ್ಗೆ ಇರುವ ಕಲ್ಪನೆಯೇ ವಿಭಿನ್ನ. ಪುರುಷರಿಗಿಂತಲೂ ಮಹಿಳೆ ಮಿಗಿಲು ಎಂಬ ಪೂಜನೀಯ ಭಾವ ನಮ್ಮದು. ನಮ್ಮ ಪೂರ್ವಜರು ಭೂಮಿಯನ್ನು ಹೆಣ್ಣಿಗೆ ಹೋಲಿಸಿದ್ದಾರೆ. ಯಾಕೆಂದರೆ ಬೀಜವು ಭೂಮಿಗೆ ಬಿದ್ದಾಗ ಮಾತ್ರ ಮೊಳಕೆಯೊಡೆಯಲು ಸಾಧ್ಯ. ಹಾಗೆಯೇ ಹೆಣ್ಣಿಗೆ ಮಾತ್ರ ಜನ್ಮ ನೀಡುವ ಸಾಮರ್ಥ್ಯವಿರುವುದು. ಈ ದೃಷ್ಟಿಯಿಂದಲೇ ಹೆಣ್ಣು ಮಾತೃಸ್ವರೂಪಿ ಎಂದೆನಿಸಿಕೊಂಡಿದ್ದಾಳೆ ಎಂದರು.
ಈ ಸಂದರ್ಭದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿ ಕುಮಾರಿ ಅನಿತಾ ಈ ದಿನದ ಮಹತ್ವವನ್ನು ವಿವರಿಸಿದರು.
ವೇದಿಕೆಯಲ್ಲಿ ಪ್ರಣತಿ ಇಂಗ್ಲೀಷ್ ಸಂಘದ ನಿರ್ದೇಶಕಿ ಎಲ್. ಶ್ರೀದೇವಿ, ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಸುಕನ್ಯಾ, ಶೈಲಜಾ ಉಪಸ್ಥಿತರಿದ್ದರು. ಪ್ರಥಮ ವರ್ಷದ ವಿದ್ಯಾರ್ಥಿನಿ ಕುಮಾರಿ ಶ್ರೇಯಶ್ರೀ ಪಿ. ವಂದಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.