Saturday, October 21, 2023

ಫೆ.19: ಎಸ್‌ಕೆಎಸ್‌ಎಸ್‌ಎಫ್ ಕನ್ಯಾನ ಶಾಖೆ ವತಿಯಿಂದ ಏಕದಿನ ಮತ ಪ್ರವಚನ

Must read

ವಿಟ್ಲ: ಎಸ್‌ಕೆಎಸ್‌ಎಸ್‌ಎಫ್ ಕನ್ಯಾನ ಶಾಖೆ ವತಿಯಿಂದ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಏಕದಿನ ಮತ ಪ್ರವಚನ ಹಾಗೂ ಮಜ್ಲಿಸ್‌ನ್ನೂರ್ ಮಹಾ ಸಂಗಮ ಫೆ. 19ರಂದು ಸಂಜೆ ಕನ್ಯಾನ ಗೋಳಿಕಟ್ಟೆಯಲ್ಲಿ ನಡೆಯಲಿದ್ದು, ಅಂತರಾಷ್ಟ್ರೀಯ ಪ್ರಭಾಷಣಗಾರ ಅಲ್ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಇಬ್ರಾಹಿಂ ಕಡವ ಬೀಟಿಗೆ ತಿಳಿಸಿದರು.
ಅವರು ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಎಸ್ಕೆಎಸ್‌ಎಸ್‌ಎಫ್ ಕನ್ಯಾನ ಶಾಖೆ ಪ್ರಾರಂಭಗೊಂಡು ಒಂದು ವರ್ಷ ತುಂಬಿದೆ. ಈ ಅವಧಿಯಲ್ಲಿ ಹಲವಾರು ಧಾರ್‍ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್‍ಯಕ್ರಮಗಳ ಮೂಲಕ ತನ್ನದೇ ಆದ ಛಾಪನ್ನು ಹೊಂದಿದೆ. ಹಲವು ಸಹಾಯಧನಗಳನ್ನು ವಿತರಿಸುತ್ತಿದೆ. ಇದೀಗ ವಾರ್ಷಿಕೋತ್ಸವ ಸಂಭ್ರಮದಲ್ಲಿದೆ ಎಂದು ತಿಳಿಸಿದರು.
ಬೆಳಗ್ಗೆ ಸ್ವಾಗತ ಸಮಿತಿ ಚೇಯರ್ ಮ್ಯಾನ್ ಎಸ್.ಕೆ ಉಮರ್ ಉಸ್ತಾದ್ ಕನ್ಯಾನ ಧ್ವಜಾರೋಹಣ ಮಾಡಲಿದ್ದಾರೆ. ಹಮೀದ್ ಮುಸ್ಲಿಯಾರ್ ಕೊನಾಲೆ ಕನ್ಯಾನ ದುವಾಃ ಆಶೀರ್ವಚನ ನೀಡಲಿದ್ದಾರೆ. ಸಂಜೆ ಶಾಹುಲ್ ಹಮೀದ್ ವಲಿಯುಲ್ಲಾಹಿ ಝಿಯಾರತ್ ಗೆ ಕೆ.ಎಸ್ ಅಲಿ ತಂಙಳ್ ಕುಂಬೋಳ್ ನೇತೃತ್ವ ನೀಡಲಿದ್ದಾರೆ. ಮಜ್ಲಿಸುನ್ನೂರು ಮಹಾ ಸಂಗಮದಲ್ಲಿ ಸಯ್ಯಿದ್ ಅಮೀರ್ ತಂಙಳ್ ಕಿನ್ಯ ದುವಾಃ ಆರ್ಶೀರ್ವಚನ ನೀಡಲಿದ್ದಾರೆ. ಶೈಖುನಾ ಎಂ.ಎ ಖಾಸಿಂ ಉಸ್ತಾದ್ ನೇತೃತ್ವ ನೀಡಲಿದ್ದಾರೆ. ಶೈಖುನಾ ಬಿ.ಕೆ ಅಬ್ದುಲ್ ಖಾದರ್ ಅಲ್ ಖಾಸಿಮಿ ಪ್ರವಚನ ನೀಡಲಿದ್ದಾರೆ.
ಐತಿಹಾಸಿಕ ಮಹಾಸಂಗಮವನ್ನು ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ಅಧ್ಯಕ್ಷ ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತು ಕೋಯ ತಂಙಳ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಯ್ಯಿದ್ ಬಾತಿಷ ತಂಙಳ್ ಆನೆಕಲ್ಲು ಅಧ್ಯಕ್ಷತೆ ವಹಿಸಲಿದ್ದಾರೆ. ಅಲ್ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಮ್ಮರ್ ಮುಸ್ಲಿಯಾರ್, ಅಬೂಬಕ್ಕರ್ ಅಂಗ್ರಿ, ಕಲಂದರ್ ಕುಕ್ಕಾಜೆ, ಶರೀಫ್ ಕೆಲಿಂಜ, ಬಶೀರ್ ಬೈರಿಕಟ್ಟೆ, ಮಜೀದ್ ಕನಿಯೂರು ವಿ. ಅಬ್ದುಲ್ ಖಾದರ್ ಉಪಸ್ಥಿತರಿದ್ದರು.

More articles

Latest article