Wednesday, October 18, 2023

ಮಿತ್ತಬೈಲ್ ಜಬ್ಬಾರ್ ಉಸ್ತಾದ್ ಅವರ ಕಬರ್ ಗೆ ಎಪಿ ಅಬೂಬಕರ್ ಮುಸ್ಲಿಯಾರ್ ಭೇಟಿ

Must read

ಬಂಟ್ವಾಳ: ಜ. 8ರಂದು ನಿಧನರಾದ ಹಿರಿಯ ಧಾರ್ಮಿಕ ಪಂಡಿತ, ಸಮಸ್ತ ಉಪಾಧ್ಯಕ್ಷರಾದ ಮಿತ್ತಬೈಲ್ ಜಬ್ಬಾರ್ ಉಸ್ತಾದ್ ಅವರ ಕಬರ್ ಗೆ ಅಖಿಲ ಭಾರತ ಸುನ್ನೀ ಜಂಮಿಯ್ಯತುಲ್ ಉಲಮಾ ಇದರ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರು ಗುರುವಾರ ರಾತ್ರಿ ಭೇಟಿ ನೀಡಿ ಝಿಯಾರತ್ ಮಾಡಿದರು.


ಬಳಿಕ ಝಿಕ್ರ್ ಪಠಿಸಿ, ಸಾಮೂಹಿಕ ಪಾರ್ಥನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಅಶ್ರಫ್ ಸಾದಿ ಮಲ್ಲೂರು, ನೌಶಾದ್ ಸೂರಲ್ಪಾಡಿ, ಆಶಿಕ್ ಸಖಾಫಿ, ಮಿತ್ತಬೈಲ್ ಮಸೀದಿಯ ಅಧ್ಯಕ್ಷ ಹಬೀಬುಲ್ಲಾ, ಅದ್ದೇಡಿ, ಎಸ್‌.ಎಂ.ಮುಹಮ್ಮದ್ ಅಲಿ, ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ, ಇರಾ ಗ್ರಾಪಂ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಯೂಸುಫ್ ಕರಂದಾಡಿ, ಮುಹಮ್ಮದ್ ನಂದಾವರ, ಜಬ್ಬಾರ್ ಉಸ್ತಾದ್ ಅವರ ಮಕ್ಕಳು, ಆಡಳಿತ ಸಮಿತಿ ಸದಸ್ಯರು, ಉಸ್ತಾದರು, ಸಾರ್ವಜನಿಕರು ಹಾಜರಿದ್ದರು. ಎಪಿ ಉಸ್ತಾದ್ ಆಗಮನ ಹಿನ್ನೆಲೆಯಲ್ಲಿ ಮಸೀದಿ ವಠಾರದಲ್ಲಿ ನೂರಾರು ಮಂದಿ ಜಮಾಯಿಸಿದ್ದರು.

More articles

Latest article