Tuesday, October 24, 2023

ಡಿ. 29ರಂದು ಅನುಸ್ಮರಣೆ, ಮೌಲೀದ್ ಮಜ್ಲೀಸ್,ಸುರಿಬೈಲು ಉಸ್ತಾದ್ ಆಂಡ್ ನೇರ್ಚೆ ಪ್ರಚಾರ ಸಂಗಮ

Must read

ಬಂಟ್ವಾಳ: ಬೋಳಂತೂರು- ನಾರಂಕೋಡಿ ತಾಜುಲ್ ಉಲಮಾ ಮದ್ರಸ ವತಿಯಿಂದ ಕಣ್ಣಿಯತ್ ಉಸ್ತಾದ್, ಶಂಸುಲ್ ಉಲಮಾ ಪಿ.ಎ.ಉಸ್ತಾದ್, ನೂರುಲ್ ಉಲಮಾ, ಮಮ್ಮುಂಞಿ ಉಸ್ತಾದ್ ಅವರ ಅನುಸ್ಮರಣೆ ಹಾಗೂ ಮೌಲೀದ್ ಮಜ್ಲೀಸ್ ಮತ್ತು ಸುರಿಬೈಲು ಉಸ್ತಾದ್ ಆಂಡ್ ನೇರ್ಚೆ ಪ್ರಚಾರ ಸಂಗಮ ಡಿ. 29ರಂದು ನಾರಂಕೋಡಿ ಟಿ.ಯು.ಮದ್ರಸದ ವಠಾರದಲ್ಲಿ ನಡೆಯಲಿದೆ. ಅಂದು ಸಂಜೆ 6ಕ್ಕೆ ಸ್ವಾಗತ ಸಮಿತಿಯ ಚೇಯರ್ಮೆನ್ ಅಬ್ದುಲ್ ಖಾದರ್ ಕೊಕ್ಕಪುಣಿ ಧ್ವಜಾರೋಹಣ ನೆರವೇರಿಸುವರು. 6.30ಕ್ಕೆ ಅಬ್ದುಲ್ ರಶೀದ್ ಹನೀಫಿ ದಾರುಲ್ ಅಶ್‌ಅರಿಯ್ಯ ನೇತೃತ್ವದಲ್ಲಿ ಅಶ್‌ಅರಿಯ್ಯ ಇಕ್ವಾನ್ ಬಳಗದಿಂದ ತಾಜುಲ್ ಉಲಮಾ ಮೌಲೀದ್ ಆಲಾಪನೆ ನಡೆಯಲಿದೆ. ರಾತ್ರಿ 7.30ಕ್ಕೆ ಅನುಸ್ಮರಣಾ ಸಂಗಮ ನಡೆಯಲಿದ್ದು, ಅಸ್ಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ ಅವರು ದುಆಃ ನೆರವೇರಿಸುವರು. ಬೋಳಂತೂರು ಆರ್.ಜೆ.ಎಂ. ಖತೀಬ್ ಅಬ್ದುಲ್ ರಹಿಮಾನ್ ಸಖಾಫಿ ಉದ್ಘಾಟಿಸುವರು. ದಾರುಲ್ ಅಶ್‌ಅರಿಯ್ಯ ಇದರ ಮ್ಯಾನೇಜರ್ ಮುಹಮ್ಮದ್ ಅಲಿ ಸಖಾಫಿ ಅನುಸ್ಮರಣಾ ಭಾಷಣ ಮಾಡುವರು. ಟಿ.ಯು.ಮದ್ರಸ ಅಧ್ಯಕ್ಷ ಅಬ್ದುಲ್ಲಾ ಅಧ್ಯಕ್ಷತೆ ವಹಿಸುವರು. ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು ಮುಖ್ಯ ಪ್ರಭಾಷಣ ಮಾಡುವರು. ಅಬ್ದುಲ್ ಹಮೀದ್ ಮದನಿ ಉಪಸ್ಥಿತರಿರುವರು ಎಂದು ಜಮಾಅತ್ನ ಪ್ರಕಟನೆ ತಿಳಿಸಿದೆ.

More articles

Latest article