Saturday, October 21, 2023

ಡಿ. 22ರಂದು ಪ್ರೊ ಕಬಡ್ಡಿ ಪಂದ್ಯಾಟ

Must read

ಬಂಟ್ವಾಳ: ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಪುರಿಯ ವಿಕ್ರಮ ಯುವಕ ಮಂಡಲದ ಆಶ್ರಯದಲ್ಲಿ ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇವರ ಸಹಭಾಗಿತ್ವದೊಂದಿಗೆ ಅವಿಭಜಿತ ದ.ಕ. ಮತ್ತು ಕಾಸರಗೋಡು ಮಟ್ಟದ ಜಿಲ್ಲಾ ಹೊನಲು ಬೆಳಕಿನ ಪುರುಷರ 60 ಕೆ.ಜಿ. ವಿಭಾಗದ ಪ್ರೊ ಕಬಡ್ಡಿ ಪಂದ್ಯಾಟ ವಿಕ್ರಮ್ ಟ್ರೋಫಿ-2018 ಪುರಿಯ ಶ್ರೀದೇವಿ ಭಜನ ಮಂದಿರದ ಮೈದಾನದಲ್ಲಿ ಡಿ. 22ರಂದು ಸಂಜೆ ನಡೆಯಲಿದೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಲಿರುವರು. ಬೆಳ್ತಂಗಡಿ ವರುಣ್ ಟ್ರಾವೆಲ್ಸ್ ಮಾಲಕ ವಿಜಯ್ ಫೆರ್ನಾಂಡಿಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಹಾಗೂ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಪ್ರಕಟನೆ ತಿಳಿಸಿದೆ.

More articles

Latest article