Sunday, October 22, 2023

ಬೈಕ್ ಸವಾರ ಅಪಘಾತದಲ್ಲಿ ಸಾವು

Must read

ಬಂಟ್ವಾಳ: ಬೈಕ್ ಗಳ ಮಧ್ಯೆ ಡಿಕ್ಕಿಯಾದ ಬಳಿಕ ಸ್ಕಿಡ್ ಆಗಿ ಬೈಕ್ ಸವಾರ ಮ್ರತಪಟ್ಟು ಇಬ್ಬರು ಗಾಯಗೊಂಡ ಘಟನೆ ಇರಾಪದವು ಎಂಬಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಇರಾ ನಿವಾಸಿ ಯೋಗೀಶ್ ಮ್ರತಪಟ್ಟ ವರು.‌ ಯೋಗೀಶ್ ಅವರ ಸಹಸವಾರ ರವೀಶ್ ಮತ್ತು ಬೈಕ್ ಸವಾರ ಗಣೇಶ್ ಅವರು ಗಾಯಗೊಂಡಿರುವರು.
ನಾಲ್ಕು ಮಂದಿ ಸ್ನೇಹಿತ ರು ನಿನ್ನೆ ಮುಡಿಪು ವಿನಲ್ಲಿ ನಡೆಯುತಿದ್ದ ವಸ್ತು ಪ್ರದರ್ಶನ ವನ್ನು ನೋಡಿ ಹಿಂತಿರುಗುವ ವೇಳೆ ಯೋಗಿಶ್ ಅವರ ಅತೀ ವೇಗದ ಚಾಲನೆ ಮತ್ತು ನಿರ್ಲಕ್ಷ್ಯ ದ ಚಾಲನೆಯಿಂದ ಸ್ನೇಹಿತ ಗಣೇಶ್ ಅವರ ಬೈಕ್ ಡಿಕ್ಕಿಯಾಗಿ ಬಳಿಕ ಸ್ಕಿಡ್ ಆಗಿ ಬಿದ್ದು ಗಂಭೀರ ಗಾಯಗೊಂಡ ಯೋಗೀಶ್ ಅವರು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ನಿಧನರಾದರು ಎಂದು ಪೋಲೀಸರು ತಿಳಿಸಿದ್ದಾರೆ. ‌
ಬಂಟ್ವಾಳ ಟ್ರಾಫಿಕ್ ಪೋಲೀಸ್ ಠಾಣೆಯ ಲ್ಲಿ ಪ್ರಕರಣ ದಾಖಲಾಗಿದೆ. ‌

More articles

Latest article